ಶ್ರೀಗುರು ಮಂತ್ರಾಲಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಲಯನ್ ಶೃಂಗಾರ್ ಎಂ.ಸಂಜೀವ್ ಶೆಟ್ಟಿ ಹಾಗೂ ಲಯನ್ ಎಸ್. ವೆಂಕಟೇಶ್ ಅವರು ನಿರ್ಮಿಸುತ್ತಿರುವ ‘ಲವ್ oಟಿ ಓಊ೪ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.
ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಚಿತ್ರದ ನಾಯಕಿ ಒಂದು ಕೋಟಿ ರೂಪಾಯಿ ಬಹುಮಾನ ಗೆಲ್ಲುತ್ತಾಳೆ. ಈ ಸನ್ನಿವೇಶವನ್ನು ರಾಕ್ಲೈನ್ ಸ್ಟುಡಿಯೋದಲ್ಲಿ ಚಿತ್ರಿಸಿಕೊಳ್ಳಲಾಯಿತು. ಅಕುಲ್ಬಾಲಾಜಿ, ತಿಲಕ್, ಮಾಧುರಿ ಹಾಗೂ ಮಾಡಲ್ಸ್ ಈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅತಿಥಿಪಾತ್ರದಲ್ಲಿ ಶ್ರೀನಗರ ಕಿಟ್ಟಿ, ವಿ.ಮನೋಹರ್, ಚಿತ್ರಾ ಶೆಣೈ ಅಭಿನಯಿಸಿದ್ದರು. ನಿರ್ಮಾಪಕ ಲಯನ್ ಎಂ.ಸಂಜೀವ ಶೆಟ್ಟಿ ಜಡ್ಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಇನ್ನೂ ಹತ್ತು ದಿನಗಳ ಚಿತ್ರೀಕರಣ ಬಾಕಿಯಿದೆ. ಡಿಸಂಬರ್ ೨೪ರಿಂದ ೩೧ರವರೆಗೂ ಹೈದರಾಬಾದ್ನ ರಾಮೋಜಿ ಫ಼ಿಲಂಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ.
ಪತ್ರಕರ್ತ ಪಿ.ಎನ್.ಶ್ರೀನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇಳಯರಾಜ ಅವರ ಸಂಗೀತ ನಿರ್ದೇಶನವಿದೆ. ನಿರಂಜನ್ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಫ಼ೈವ್ಸ್ಟಾರ್ ಗಣೇಶ್, ಇಮ್ರಾನ್, ಕಪಿಲ್, ಜಗ್ಗಿ ನೃತ್ಯ ನಿರ್ದೇಶನ ಹಾಗೂ ಶ್ರೀನಿವಾಸ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅಕುಲ್ ಬಾಲಾಜಿ, ತಿಲಕ್, ಮಾಧುರಿ, ಬುಲೆಟ್ಪ್ರಕಾಶ್, ಮಂಡ್ಯ ರಮೇಶ್, ನಯನಕೃಷ್ಣ, ನರ್ಸ್ ಜಯಲಕ್ಷ್ಮೀ, ಮೈತ್ರೇಯ ಗೌಡ, ರ್ಯಾಪಿಡ್ ರಶ್ಮಿ, ರಾಕ್ಸ್ಟಾರ್ ರೋಹಿತ್ ಮುಂತಾದವರಿದ್ದಾರೆ.